ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ, ನಾಟಿ ವೈದ್ಯ ಗೋಪಾಲಕೃಷ್ಣ ಭಟ್ ನೀಲಗಿರಿ ನಿಧನ


 ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ, ನಾಟಿ ವೈದ್ಯ ಗೋಪಾಲಕೃಷ್ಣ ಭಟ್ ನೀಲಗಿರಿ ನಿಧನ

ಕಂಗಿಲ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳೀಯ ನಾಟಿ ವೈದ್ಯರಾಗಿದ್ದ ಗೋಪಾಲಕೃಷ್ಣ ಭಟ್ ನೀಲಗಿರಿ (88) ಅವರು ವಯೋಸಹಜ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಸರಸ್ವತಿ, ಪುತ್ರಿಯರಾದ ವಿಜಯಲಕ್ಷ್ಮಿ ಬದಿಯಡ್ಕ ಹಾಗೂ ಪುತ್ರರಾದ ಡಾ. ಶ್ಯಾಮಸುಂದರ ಬೇಳ ಮತ್ತು ರಾಜಶೇಖರ್ ಭಟ್, ಸೊಸೆಯಂದಿರಾದ ಸಾವಿತ್ರಿ, ಸರಸ್ವತಿ, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಗೋಪಾಲಕೃಷ್ಣ ಭಟ್ ಅವರು ಸ್ಥಳೀಯವಾಗಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು