ಮಧೂರು :ಮಧೂರು ಪಂಚಾಯತ್ ಯುವ ಬಂಟರ ಸಂಘದ ಆಟಿಡೊಂಜಿ ದಿನ ಪರಕ್ಕಿಲಡ್ ಕಾರ್ಯಕ್ರಮ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಬಂಟ ಮಹಿಳೆಯರಿಂದ ಭಜನೆಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮವನ್ನು ಬಂಟರ ಸಂಘದ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಸದಸ್ಯರೂ ಆಗಿರುವ ಕಾಸರಗೋಡಿನ ಹಿರಿಯ ನ್ಯಾಯವಾದಿ ಸದಾನಂದ ರೈ ಉದ್ಘಾಟಿಸಿದರು.
ಶಿವರಾಜ ರೈ ಕಾಲಿoಗಾಡು ಮೊದಲಾದವರು ಉಪಸ್ಥಿತರಿದ್ದರು.ಕರ್ನಾಟಕದ ಹೆಸರಾಂತ ನಿರೂಪಕ ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಬಳಿಕ ವಿವಿಧ ಸ್ಪರ್ಧೆಗಳು, ಆಟಿ ಮಾಸದ ವಿಶೇಷ ತಿಂಡಿ ತಿನಸುಗಳ ಪ್ರದರ್ಶನ, ಬಂಟ ಯುವಕರು ಹೊಸಮನೆ ಇವರಿಂದ ಯಕ್ಷ ಗಾನ ಬಯಲಾಟ, ಸಭಿಕರಿಗೆ ಭೂರಿ ಭೋಜನ ನಡೆಯಿತು. ಕ್ರೀಡಾ ಸ್ಪರ್ಧೆಗಳ ಅಂಗವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸಹಿತ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು ಅಪರಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಹಲವರಿಂದ ಸಂಗೀತ, ಹೆಣ್ಮಕ್ಕಳಿಂದ ಹಾಗೂ ಬಾಲಕ ಬಾಲಕಿಯರಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ನಡೆಯಿತು ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು
Tags
ಮಧೂರು


