ಬದಿಯಡ್ಕ : ಕ್ಯಾಂಪ್ಕೋದ ಸಾಂತ್ವನ ಯೋಜನೆಯಡಿ ಕ್ಯಾಂಪ್ಕೋ ಸದಸ್ಯ ದಿ. ನಾರಾಯಣ ಕೆ. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ ರೂ. 2 ಲಕ್ಷ ಧನಸಹಾಯವನ್ನು ಅವರ ನಿವಾಸಕ್ಕೆ ತೆರಳಿ ಹಸ್ತಾಂತರಿಸಲಾಯಿತು. ಕ್ಯಾಂಪ್ಕೊ ನಿರ್ದೇಶಕ ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ, ಹಾಗೂ ಗಣೇಶ್ ಕುಮಾರ್ ಎ. ಪಾರಕಟ್ಟೆ ಅವರು ದಿ, ನಾರಾಯಣ ಕೆ. ಅವರ ಪತ್ನಿ ಉಷಾ ನಾರಾಯಣನ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬದಿಯಡ್ಕ ರೀಜನ್ ಚೀಫ್ ಮ್ಯಾನೇಜರ್ ಚಂದ್ರ ಎಂ., ಕ್ಯಾಂಪ್ಕೋ ಮುಳಿಯಾರು ಶಾಖಾ ವ್ಯವಸ್ಥಾಪಕರು ಹಾಗೂ ಕಾಸರಗೋಡು ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಸದಸ್ಯರ ಕುಟುಂಬದವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tags
ಬದಿಯಡ್ಕ
