ರಾಷ್ಟ್ರೀಯ ಪ್ರತಿಭಟನೆಯ ಭಾಗವಾಗಿ ಸಿಪಿಐ ವತಿಯಿಂದ ಕಾಲ್ನಡಿಗೆ ಪ್ರಚಾರ ಜಾಥಾ


 ರಾಷ್ಟ್ರೀಯ ಪ್ರತಿಭಟನೆಯ ಭಾಗವಾಗಿ ಸಿಪಿಐ ವತಿಯಿಂದ ಕಾಲ್ನಡಿಗೆ ಪ್ರಚಾರ ಜಾಥಾ ನಡೆಸಲಾಗಿದೆ.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ 2026ರ ಸೆಪ್ಟೆಂಬರ್ 1ರಂದು ಸಂಸತ್ತಿಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಚಾರಾರ್ಥವಾಗಿ ಸಿಪಿಐ ಬದಿಯಡ್ಕ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಜಾಥಾ ನಡೆಸಲಾಯಿತು. ಬದಿಯಡ್ಕದಲ್ಲಿ ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ರಾಮಕೃಷ್ಣ ಕಡಂಬಾರ್ ಅವರು ಜಾಥಾವನ್ನು ಉದ್ಘಾಟಿಸಿದರು. ಸ್ಥಳೀಯ ಸಮಿತಿ ಸದಸ್ಯ ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಾಥಾ ನಾಯಕ ಬಿ. ಸುಧಾಕರನ್, ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಬಿ. ಸುಕುಮಾರನ್, ಚಂದ್ರಶೇಖರ ಶೆಟ್ಟಿ, ಮಂಡಳ ಸಮಿತಿ ಸದಸ್ಯ ಪ್ರಕಾಶ್ ಕುಂಬಾಡ ಹಾಗೂ ಇತರರು ಮಾತನಾಡಿದರು. ಅಡ್ವೊಕೇಟ್ ಪ್ರಸನ್ನಕುಮಾರ್ ಸ್ವಾಗತಿಸಿದರು. ನೀರ್ಚಾಲಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಿಪಿಐ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಅಡ್ವೊಕೇಟ್ ಸುರೇಶ್ ಬಾಬು ಮಾತನಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು