ಬಂದಡ್ಕ: ಕುಟ್ಟಿಕೋಲ್ ಗ್ರಾಮ ಪಂಚಾಯತ್ನ ವೀಟ್ಟಿಯಾಡಿ 9ನೇ ವಾರ್ಡ್ನ ಜನರು ಗ್ರಾಮಸಭೆಯಲ್ಲಿ ಭಾಗವಹಿಸಿದರೆ ತರಕಾರಿ ಬೀಜಗಳೊಂದಿಗೆ ಹಿಂತಿರುಗಬಹುದು. ಇಂತಹ ವಿನೂತನ ಆಲೋಚನೆಯನ್ನು ವಾರ್ಡ್ ಸದಸ್ಯ ಮಹೇಶ್ ಗೋಪಾಲ್ ಮುಂದಿಟ್ಟಿದ್ದಾರೆ. ಪ್ರತಿಯೊಂದು ಮನೆಯಲ್ಲೂ ತರಕಾರಿ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬೀಜಗಳನ್ನು ವಿತರಿಸಲಾಗುತ್ತಿದೆ.
ಈ ಹಿಂದೆ ವಾರ್ಡ್ನ ಹಿರಿಯ ನಾಗರಿಕರಿಗೆ 'ಅಂಬೇಡ್ಕರ್ ಸ್ನೇಹಸ್ಪರ್ಶ' ಯೋಜನೆಯಡಿ ನೆರವಿನ ಉಪಕರಣಗಳನ್ನು ವಿತರಿಸಿ ಹಾಗೂ ಮಕ್ಕಳಿಗೆ 'ನಮೋ ಕಿಟ್' ಹೆಸರಿನಲ್ಲಿ ಶೈಕ್ಷಣಿಕ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ವೀಟ್ಟಿಯಾಡಿ ವಾರ್ಡ್ ಮತ್ತು ವಾರ್ಡ್ ಸದಸ್ಯರು ಗಮನ ಸೆಳೆದಿದ್ದರು.
Tags
ಕಾಸರಗೋಡು
