ಬೇಕಲ ಕೋಟೆಯ ಬಳಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ


 ಕಾಸರಗೋಡು: ಬೇಕಲ ಕೋಟೆಯ ಬಳಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿದೆ. ಇಬ್ಬರು ಪಾರಾಗಿದ್ದಾರೆ. ಕೊಟ್ಟಯಂ ಚಂಗನಾಶೇರಿ ನಿವಾಸಿಗಳಾದ ಅಂಕಿತ್(20), ಅಪ್ಪು ಟಿ ಅಬ್ರಹಾಂ (20) ನಾಪತ್ತೆಯಾದವರು.  ಇಂದು (ಆದಿತ್ಯವಾರ) ಸಾಯಂಕಾಲ 6.30 ರ ವೇಳೆ ಈ ಘಟನೆ ನಡೆದಿದೆ.

 ಕೊಟ್ಟಯಂ ಚಂಗನಾಶೇರಿಯಿಂದ ಪ್ರವಾಸ ಹೊರಟ ನಾಲ್ಕು ಮಂದಿಯ ತಂಡ ಬೇಕಲ ಕೋಟೆಯ ಬಳಿಯ ಪಳ್ಳಿಕ್ಕರೆ ಬೀಚ್ ನಲ್ಲಿ ಸಮುದ್ರದಲ್ಲಿ ಸ್ನಾನಕ್ಕಿಳಿದಾಗ ದುರಂತ ಉಂಟಾಗಿದೆ. ಮಾಹಿತಿ ತಿಳಿದು ಬೇಕಲ‌ ಪೊಲೀಸರು, ಸ್ಥಳೀಯರು ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು