ಕಣ್ಣೂರು ಜಿಲ್ಲೆಯ ಕಾಪ್ಪಿಮಲ ಮಂಜಪ್ಪುಲ್ನಲ್ಲಿ ಸಿಡಿಲು ಬಡಿದು ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಪುಳಿಂಗೋಮ್ ವಿಲೇಜ್ ಆಫೀಸ್ ಉದ್ಯೋಗಿ ಮತ್ತು ಪೇರಾವೂರು ಕೊಲಯಾಡ್ ನಿವಾಸಿಯಾದ ಅಂಜು ಮ್ಯಾಥ್ಯೂ (32) ಮೃತಪಟ್ಟ ದುರ್ದೈವಿ.ಇವರೊಂದಿಗಿದ್ದ ಪತಿ, ಕಾಕ್ಕಯಂಚಾಲ್ ನಿವಾಸಿ ವಾಳಪ್ಪಳ್ಳಿಯಿಲ್ ಸೋನು ಸೆಬಾಸ್ಟಿಯನ್ ಮತ್ತು ಫಾರೆಸ್ಟ್ ವಾಚರ್ ಅರಂಗಮ್ ನಿವಾಸಿ ಸತೀಶನ್ ಎಂಬುವವರಿಗೆ ಗಾಯಗಳಾಗಿವೆ. ಇವರನ್ನು ಕರುವಂಚಾಲ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಭಾನುವಾರ) ಸಂಜೆ 5 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪ್ರವಾಸದ ಅಂಗವಾಗಿ ಪತಿಯೊಂದಿಗೆ ಮಂಜಪ್ಪುಲ್ಗೆ ಬಂದಿದ್ದ ಅಂಜು ಅವರಿಗೆ ಹಠಾತ್ತನೆ ಸಿಡಿಲು ಬಡಿದಿದೆ. ಅಪಘಾತದ ಎರಡೂವರೆ ಗಂಟೆಗಳ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಲಾಗಿದೆಯಾದರೂ, ಅಂಜು ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
Tags
ಕಣ್ಣೂರು
