ಕೋಜಿಕೋಡ್: ಕ್ಯಾಪ್ಸೂಲ್ ರೂಪದಲ್ಲಿ ಸಾಗಿಸಲು ಯತ್ನಿಸಿದ 1,054 ಗ್ರಾಂ ಚಿನ್ನದ ಮಿಶ್ರಣದೊಂದಿಗೆ ಮೂವರು ಕರಿಪುರ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕಣ್ಣೂರು ಕೊಳತ್ತುವಯಲ್ ಅಂಜಾಂಪೀಡಿಕ ನಿವಾಸಿ ತಸ್ಲೀಮ್ ಪಾರಕ್ಕಲ್ (32) ಮತ್ತು ಆತನನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವಡಕರ ನಿವಾಸಿಗಳಾದ ಎ. ರಬೀಶ್ (37), ಆಶಿಮ್ (56) ಬಂಧಿತರು.
ನಿನ್ನೆ (ಭಾನುವಾರ) ಬೆಳಿಗ್ಗೆ 09.30 ಕ್ಕೆ ರಾಸಲ್ ಖೈಮಾದಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದ ಪ್ರಯಾಣಿಕ ತಸ್ಲೀಮ್ ಆಗಿದ್ದನು. ಈತನು ದೇಹದಲ್ಲಿ ಬಚ್ಚಿಟ್ಟು ಸಾಗಿಸಲು ಯತ್ನಿಸಿದ್ದ ನಾಲ್ಕು ಕ್ಯಾಪ್ಸೂಲ್ ರೂಪದಲ್ಲಿದ್ದ 131 ಪವನ್ ಚಿನ್ನದ ಮಿಶ್ರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋಜಿಕ್ಕೋಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಶಂಕಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಪೊಲೀಸರು ನಡೆಸಿದ ತಪಾಸಣೆಯಲ್ಲಿ ಈ ದಂಧೆ ಬೆಳಕಿಗೆ ಬಂದಿದೆ
Tags
ಕೋಜಿಕ್ಕೋಡ್
