ಪೊಯ್ಯೆ ಶ್ರೀ ಚಾಮುಂಡಿ ದೈವಸ್ಥಾನ ಬಜಾಲ್, ಪಾವೂರು ಇದರ ಆಡಳಿತ ಮಂಡಳಿಯ 25-26ರ ವಾರ್ಷಿಕ ಮಹಾಸಭೆ , ಲೆಕ್ಕಪತ್ರ ಮಂಡನೆ, ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಕ್ಷೇತ್ರದ ವಠಾರದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಮನೋಹರ ಶೆಟ್ಟಿ ಕೆದುಂಬಾಡಿ ಇವರ ಅಧ್ಯಕ್ಷತೆಯಲ್ಲಿ ಮಹಾಸಭೆಯು ನಡೆಯಿತು. ಸಭೆಯಲ್ಲಿ ನಾರಾಯಣಶೆಟ್ಟಿ ಕಿನ್ಯಗುತ್ತು, ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ ಪೂಜಾರಿ ಮುಡಿಮಾರು, ವಸಂತ ರೆಂಜಪಡುಪು, ನಾರಾಯಣಶೆಟ್ಟಿ ಬಜಾಲ್, ಭುಜಂಗ ಸಿಂತಾಜೆ, ಶಿವರಾಮ ಶೆಟ್ಟಿ ಮುಗೇರು ಗುತ್ತು, ತ್ಯಾಂಪಣ್ಣರೈ ಪಾವೂರು ,ಭೋಜ ಮಾಸ್ಟರ್, ಮಾಧವ ಪೂಜಾರಿ ಕುದುಕೋರಿ, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ್ ತಚ್ಚಿರೆ ವರದಿ ವಾಚಿಸಿ, ಭೋಜ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು. ನಂತರ ಕ್ಷೇತ್ರಾಡಳಿತ ಮಂಡಳಿಯ ನೂತನ ಸಮಿತಿ ರೂಪಿಕರಣಗೊಂಡಿತು. ಅಧ್ಯಕ್ಷರಾಗಿ ವಿನೋದ್ ಕುಮಾರ್ ರೆಂಜೆಪಡ್ಪು,ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ರೈ ಪಾವೂರು, ಕೋಶಾಧಿಕಾರಿಯಾಗಿ ರವಿ ಮುಡಿಮಾರು, ಉಪಾಧ್ಯಕ್ಷರಾಗಿ ಶಿವರಾಮ ಶೆಟ್ಟಿ ಮುಗೇರು ಗುತ್ತು ,ಮಾಧವ ಪೂಜಾರಿ ಕುದುಕೋರಿ, ಆಯ್ಕೆಯಾದರೆ ಜೊತೆ ಕಾರ್ಯದರ್ಶಿ ಯಾಗಿ ರಾಜೇಶ್ ಕಾನದ ಕಟ್ಟ ,ಗೋಪಾಲ ಅಂಚನ್ ನೆಕ್ಕಳ, ಲೆಕ್ಕಪರಿಶೋಧಕರಾಗಿ ತ್ಯಾಂಪಣ್ಣರೈ ಪಾವೂರು, ಭೋಜ ಮಾಸ್ಟರ್ ಬಳ್ಳೂರು, ಆಯ್ಕೆಯಾದರು. ಅಲ್ಲದೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೋಹರ ಶೆಟ್ಟಿ ಕೆದುಂಬಾಡಿ, ವಸಂತ ರೆಂಜಪಡ್ಪು, ,ದಯಾನಂದ ಸಾಲಿಯನ್ ಕೊಪ್ಪಳ, ಭುಜಂಗ ಸಿಂತಾಜೆ, ಸುಧಾಕರ ಶೆಟ್ಟಿ ಪಾವೂರು, ನಾರಾಯಣಶೆಟ್ಟಿ ಬಜಾಲ್, ಜಯಪ್ರಕಾಶ್ ಅಡ್ಯಂತಾಯ ಕಾಪು, ರಾಜಕುಮಾರ ಶೆಟ್ಟಿ ಮುಟ್ಲ, ಚಂದ್ರಹಾಸ ಪೂಜಾರಿ ಮುಡಿಮಾರು, ದಯಾನಂದ ಪೂಜಾರಿ ನೆಕ್ಕಲ, ಮೋಹನ್ ದಾಸ್ ಪುಳಿತ್ತಡಿ, ಉದಯಕುಮಾರ್ ಬೊಳಕಡ, ಶೇಖರ ಕಾನದ ಕಟ್ಟ, ಪದ್ಮನಾಭ ಕಲ್ಲಾಪು, ವಿಶ್ವನಾಥ ಶೆಟ್ಟಿ ಕೋರಿಮೊಗರು, ಪುಷ್ಪರಾಜ್ ಶೆಟ್ಟಿ ಪಾವೂರು ಗುತ್ತು ,ಅಶೋಕ ತಚ್ಚಿರೆ, ನವಿರಾಜ್ ಮುಡಿಮಾರು, ಹರ್ಷಿತ್ ನೆಕ್ಕಳ, ನಿಶಿತ್ ನೆಕ್ಕಳ ,ಸುರೇಂದ್ರ ಉದ್ದ, ಇವರನ್ನು ಆಯ್ಕೆಗೊಳಿಸಲಾಯಿತು ನಂತರ 25-- 26ರ ಸಮಿತಿಯ ದಾಖಲೆ ಪತ್ರಗಳನ್ನು ನೂತನ ಸಮಿತಿಗೆ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷರಾದ ವಿನೋದ್ ಕುಮಾರ್ ಮಾತನಾಡಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತಾವೆಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ರವಿ ಮುಡಿಮಾರು ಸ್ವಾಗತಿಸಿ ಭೋಜ ಮಾಸ್ಟರ್ ವಂದಿಸಿದರು.
Tags
ಉಪ್ಪಳ
