ರಾಷ್ಟ್ರ ಸ್ವಾಭಿಮಾನಿ ಸಮಿತಿಯ ಆಶ್ರಯದಲ್ಲಿ ಬದಿಯಡ್ಕ ಪೇಟೆಯಲ್ಲಿ ತಿರಂಗಾ ಯಾತ್ರೆ



 ಬದಿಯಡ್ಕ: ರಾಷ್ಟ್ರ ಸ್ವಾಭಿಮಾನಿ ಸಮಿತಿ ಬದಿಯಡ್ಕ ಮಂಡಲ ಇದರ ನೇತೃತ್ವದಲ್ಲಿ 79 ನೇ ವರ್ಷದ ಸ್ವಾತಂತ್ರೋತ್ಸವದ ಭಾಗವಾಗಿ ಇಂದು ನಡೆದ ತಿರಂಗ  ಯಾತ್ರೆಯು ಬೋಳುಕಟ್ಟೆ ಮೈದಾನದಿಂದ ಬದಿಯಡ್ಕ ಪೇಟೆಯವರಿಗೆ ನಡೆಯಿತು ಭಾರತೀಯ ಜನತಾ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರವೀಶ್ ತಂತ್ರಿ ಕುಂಟಾರ್ ಇವರು ಕಾರ್ಯಕ್ರಮವನ್ನು ಮಂಡಲ ಅಧ್ಯಕ್ಷರಾದ ಗೋಪಾಲಕೃಷ್ಣ ಮುಂಡೋಳು ಮೂಲೆ ಇವರಿಗೆ ರಾಷ್ಟ್ರಧ್ವಜ ನೀಡುವ ಮೂಲಕ ಉದ್ಘಾಟಿಸಿದರು.


   ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಗ್ರಾಮ ಪಂಚಾಯತು ಅಧ್ಯಕ್ಷರುಗಳಾದ ಶಂಕರ.ಡಿ, ಯಶೋಧ, ಮಾಲಿನಿ, ಜಿಲ್ಲಾ  ಕಾರ್ಯದರ್ಶಿ  ಹಾಗೂ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ, ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ, ಅವಿನಾಶ್.ವಿ.ರೈ, ವಿವಿದ ಪಂಚಾಯತು ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿ ಇನ್ನೋರ್ವ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ಬೆಳ್ಳೂರು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು