ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲತಿಯ ಸಾಂಕೇತಿಕ ಶವಸಂಸ್ಕಾರ ನಡೆಸಿದ ಎಸ್.ಎಫ್.ಐ; ವ್ಯಾಪಕ ಪ್ರತಿಭಟನೆ


 ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವೈಸ್ ಚಾನ್ಸಲರ್ ಪ್ರೊ. ಸಿಸಾ ಥಾಮಸ್ ವಿರುದ್ಧ ಎಸ್‌.ಎಫ್‌.ಐ (SFI) ವತಿಯಿಂದ ಸಾಂಕೇತಿಕ ಶವಸಂಸ್ಕಾರ ಪ್ರತಿಭಟನೆ ನಡೆಸಲಾಗಿದೆ. ಈ ಸಾಂಕೇತಿಕ ಶವಸಂಸ್ಕಾರ ನಡೆಸುವ ವೇಳೆ ಕ್ರೈಸ್ತ ಧರ್ಮೀಯರ ಆಚರಣೆಯಾದ 'ಒಪ್ಪೀಸ್' (Ofis/Requiem) ಪ್ರಾರ್ಥನೆಯ ಹಿನ್ನೆಲೆ ಸಂಗೀತವನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ನಡೆಯುತ್ತಿದ್ದ ವೇಳೆ ಕ್ಯಾಂಪಸ್‌ನಲ್ಲಿರುವ ಶಂಕರಾಚಾರ್ಯರ ಪ್ರತಿಮೆಯ ಮುಂಭಾಗದಲ್ಲಿ ಎಸ್‌.ಎಫ್‌.ಐ ನ ಈ ಪ್ರತಿಭಟನಾ ಧರಣಿ ನಡೆಯಿತು. ವಿವಿಧ ವಿದ್ಯಾರ್ಥಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಎಸ್‌.ಎಫ್‌.ಐ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿತ್ತು.

ಸಾಂಕೇತಿಕ ಶವಸಂಸ್ಕಾರದ ಈ ಘಟನೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ 'ಸೇವ್ ಯೂನಿವರ್ಸಿಟಿ ಕ್ಯಾಂಪೇನ್ ಕಮಿಟಿ'ಯು ರಾಜ್ಯ ಗೃಹ ಸಚಿವರಿಗೆ ದೂರು ನೀಡಿದೆ. ಧಾರ್ಮಿಕ ಆಚರಣೆಗಳನ್ನು ಅವಮಾನಿಸುವ ರೀತಿಯಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು