ಹಿರಿಯ ಕೃಷಿಕ, ಬಿಜೆಪಿ ಮುಖಂಡ ಮೀಸೆಬೈಲು ರಾಮ ಭಟ್ ನಿಧನ


ಬದಿಯಡ್ಕ: ಹಿರಿಯ ಕೃಷಿಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಮೀಸೆಬೈಲು ರಾಮ ಭಟ್ ಕೆ.ಎಂ. (92) ಶುಕ್ರವಾರ ಮುಂಜಾನೆ ನಿಧನರಾದರು. ಈ ಹಿಂದೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಗ್ರಾಮಪಂಚಾಯತು ಚುನಾವಣೆಗೆ ಸ್ಪರ್ಧಿಸಿದ್ದರು.ಇವರ  ಪತ್ನಿ ವೆಂಕಟೇಶ್ವರಿ ಈ ಹಿಂದೆ ನಿಧನರಾಗಿದ್ದರು.  ಮೃತರು  ಮಕ್ಕಳಾದ ಸುಬ್ರಹ್ಮಣ್ಯ ಶರ್ಮ ಎಂ.ಆರ್., ಸುಲೋಚನ, ರಾಜೇಶ್ವರಿ, ಉಷಾ, ಸೊಸೆ ವೀಣಾ, ಅಳಿಯಂದಿರಾದ ಸುಬ್ರಹ್ಮಣ್ಯ ಭಟ್ ಪುಳು, ಗಣಪತಿ ಕಿನಿಲಕೋಡಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು