ಮುಳ್ಳೇರಿಯ: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 172.8 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಎಕ್ಸ್ಪ್ರೆಸ್ ಸ್ಪೆಶಲ್ ಸ್ಕಾಡ್ ವಶಪಡಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ನಾಯ್ಕಾಪು ನಿವಾಸಿ ಧನಂಜಯ ಪೂಜಾರಿ (35) ಎಂಬಾತನನ್ನು ಬಂಧಿಸಲಾಗಿದೆ.
ಆದೂರು ಮೊಯಂದಪಾರ ಎಂಬಲ್ಲಿ ಕಾರ್ಯಾಚರಣೆ ನಡೆದಿದೆ. ಈ ಪ್ರಕರಣವನ್ನು ಬದಿಯಡ್ಕ ಎಕ್ಸ್ಪ್ರೆಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಿವೆಂಟಿವ್ ಆಫೀಸರ್ ಕೆ.ವಿ.ರಂಜಿತ್ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇತರ ಅಧಿಕಾರಿಗಳಾದ ಸೋನು ಸೆಬಾಸ್ಟಿಯನ್, ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮಂಜುನಾಥ, ಕಬೀರ್, ಸಾಜನ್, ಕ್ರಿಸ್ಟಿನ್.ಪಿ.ಎ ಮೊದಲಾದವರು ಭಾಗವಹಿಸಿದರು.
Tags
ಮುಳ್ಳೇರಿಯ
