ಬದಿಯಡ್ಕ: ಕೇಂದ್ರ ಸರಕಾರದ ಆಹ್ವಾನದಂತೆ ದೆಹಲಿಗೆ ತೆರಳಲಿರುವ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ ಡಿ ಅವರಿಗೆ ಬಿಜೆಪಿ ಪಂಚಾಯತು ಸಮಿತಿಯ ಆಶ್ರಯದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಜಯರಾಮ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು.
ಡಿ.ಕೆ.ನಾರಾಯಣನ್ ನಾಯರ್, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಬ್ಲಾಕ್ ಪಂಚಾಯತು ಸದಸ್ಯ ಮಹೇಶ ವಳಕುಂಜ, ಬಾಲಕೃಷ್ಣ ಶೆಟ್ಟಿ,, ಅವಿನಾಶ್ ವಿ ರೈ, ರಜನಿ ಸಂದೀಪ್, ಗ್ರಾಮ ಪಂಚಾಯತು ಸದಸ್ಯರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ಕೇಂದ್ರ ಸರಕಾರಕ್ಕೆನೀಡಲಿರುವ ಮನವಿಯನ್ನು ಜಯರಾಮ ಚೆಟ್ಟಿಯಾರ್ ಅವರು ಶಂಕರ ಡಿ ಅವರಿಗೆ ಹಸ್ತಾಂತರಿಸಿದರು.
Tags
ಬದಿಯಡ್ಕ


