ಕಲ್ಲಂಗಡಿ ಹೇರಿದ‌ ಪಿಕಪ್ ವ್ಯಾನಿನಿಂದ 20 ಪೆಟ್ಟಿಗೆ ಸ್ಪೋಟಕ ವಶ, ಓರ್ವನ‌ ಸೆರೆ.


 ಕಲ್ಲಂಗಡಿ ಹೇರಿ ಬಂದ‌ ಪಿಕಪ್ ವ್ಯಾನಿನಿಂದ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಲಾಗಿದೆ. ಪಿಕಪ್ ಚಾಲಕ ತಮಿಳುನಾಡು ಕರ್ಮಪುರಿ ನಿವಾಸಿ‌ ಸೆಂಥಿಲ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಪಾಲಕ್ಕಾಡ ಪೊಲೀಸರು ಈ ಕಾರ್ಯಾಚರಣೆ ‌ನಡೆಸಿದ್ದಾರೆ.

 ತಮಿಳುನಾಡಿನಿಂದ‌ ಕೇರಳಕ್ಕೆ ಆಗಮಿಸಿದ.ಪಿಕಪ್‌ ವ್ಯಾನು ಪೊಲೀಸರು‌ ನಿಲ್ಲಿಸಲು‌ ಕೈ ತೋರಿಸಿದರೂ ಅದು‌ ನಿಲ್ಲಿಸದೆ ಪರಾರಿಯಾಯಿತು. ಇದನ್ನು ಬೆನ್ನಟ್ಟಿ ಹಿಡಿದು ಪರಿಶೋಧಿಸಿದಾಗ‌ 20 ಪೆಟ್ಟಿಗೆ ಸ್ಪೋಟಕವಸ್ತು ಪತ್ತೆಯಾಗಿದೆ.ಪೆಟ್ಟಿಗೆಗಳ‌ಲ್ಲಿ ಜಲಾಟಿನ್ ಸ್ಟಿಕ್, ಡಿಟ್ಟನೇಟರು ಎಂಬಿವು‌ ವಶಪಡಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು