ಮರ ಬಿದ್ದು ಮೊಟಕುಗೊಂಡ ವಾಹನ ಸಂಚಾರ, ಅಗ್ನಿಶಾಮಕ ದಳದಿಂದ ತೆರವು, ನೇತೃತ್ವ ವಹಿಸಿದ ಕುಂಬ್ಡಾಜೆ ಗ್ರಾಮ ಪಂಚಾಯತು ಜನಪ್ರತಿನಿಧಿಗಳು


 ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತು ವ್ಯಾಪ್ತಿಯ  ಬೊಳಿಂಜ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ಮುಂಭಾಗದಲ್ಲಿದ್ದ ಗೋಳಿ ಮರ ಧರಾಶಾಯಿಯಾಗಿ ಬಿದ್ದು ವಾಹನ ಸಂಚಾರ ಮೊಟಕುಗೊಂಡಿತು. ಈ ಮಾಹಿತಿ ತಿಳಿದ ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ, ಉಪಾಧ್ಯಕ್ಷರು ಸಹಿತ ಜನಪ್ರತಿನಿಧಿಗಳು ಆಗಮಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿ ಮರ ಕಡಿದು ತೆರವುಗೊಳಿಸಲಾಯಿತು. ಬೆಳಗ್ಗೆ  10.30 ರಿಂದ 3 ಗಂಟೆಯ ವರೆಗೆ ತೆರವುಗೊಳಿಸುವ ಕೆಲಸ ನಡೆಯಿತು. ಗ್ರಾಮ‌ಪಂಚಾಯತು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಇತರ ಜಪ್ರತಿನಿಧಿಗಳು ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು