ಕಣ್ಣೂರಿನಲ್ಲಿ‌ ಕೆ.ಎಸ್.ಯು ಪ್ರತಿಭಟನೆಯ ವೇಳೆ ಆರೋಗ್ಯ ಸಚಿವರಿಗೆ ಗಾಯ; ಆಸ್ಪತ್ರೆಗೆ ದಾಖಲು


 ಕಣ್ಣೂರು: ಕಣ್ಣೂರಿನಲ್ಲಿ‌  ಕೆ.ಎಸ್.ಯು. ಪ್ರತಿಭಟನೆಯ‌ ನಡುವೆ ಆರೋಗ್ಯಸಚಿವೆ ವೀಣಾ ಜಾರ್ಜ್ ಅವರಿಗೆ ಗಾಯಗಳಾಗಿವೆ. ಕಣ್ಣೂರು ರೈಲು ನಿಲ್ದಾಣದಲ್ಲಿ ಕೆ.ಎಸ್.ಯು. ಆಶ್ರಯದಲ್ಲಿ ನಡೆದ ಕಪ್ಪು ಬಾವುಟ ಪ್ರದರ್ಶನದ ವೇಳೆ ಸಚಿವರಿಗೆ ಗಾಯಗಳಾಗಿವೆ. ಸಚಿವರ ಕುತ್ತಿಗೆ, ಕೈಗೆ ಗಾಯವಾಗಿದ್ದು ಅವರನ್ನು ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸಚಿವರ ಜತೆ ವಿಧಾನಸಭಾ ಅಧ್ಯಕ್ಷ ಎ.ಎನ್.ಶಂಶೀರ್ ಸಹ ಇದ್ದರೆನ್ನಲಾಗಿದೆ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೇಟಿ


ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೇಟಿಯಾಗಿ ಆರೋಗ್ಯ ವಿಚಾರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು